ಜೀವನ ಹುಟ್ಟಿನಿಂದ ಸಾವಿನವರೆಗಿನ ಒಂದು ಪಯಣ, ಈ ಹುಟ್ಟು ಸಾವಿನ ಮಧ್ಯದಲ್ಲಿನ ಕಾಲ
ಘಟ್ಟ ಬದಲಾಗುತ್ತಾ ಸಾಗುತ್ತದೆ.ಇದನ್ನೇ ನಾವು ವಿಧಿ ಅಂತಾ ಕರೀತೀವಿ. ಈ ವಿಧಿ ಅಥವಾ ಹಣೆಬರಹದ
ಪ್ರಕಾರ ಜೀವನದಲ್ಲಿ ಏನೇನು ನಡಿಬೇಕು ಅದು ನಡೀತಾ ಇರುತ್ತದೆ. ಕೆಲ ಚಿಂತಕರ ಪ್ರಕಾರ ನಾವು
ಜೀವನದಲ್ಲಿ ನಡೆದದ್ದನ್ನೇ ವಿಧಿ ಅಂತಾ ಹೇಳ್ತೀವಿ ಅಂತಾ ಅ೦ಬೋಣ. ಇನ್ನೂ ಕೆಲವರು ಇವೆರಡು ನಿಲುವುಗಳ
ದ್ವ೦ದ್ವದಲ್ಲಿ ತೊಳಲಾಡುತ್ತಾ ಜೀವನ ಸಾಗಿಸುತ್ತಾರೆ. ಈ ಸಂದರ್ಭದಲ್ಲಿ ನನಗೆ ಹಿಂದಿ ಚಲನ ಚಿತ್ರ
“ಶರಾಬಿ”ಯಲ್ಲಿನ ಅಮಿತಾಭ್ ಬಚ್ಚನರ ಒಂದು ಡೈಲಾಗ್ ನೆನಪಿಗೆ ಬರುತ್ತದೆ.ಆ ಡೈಲಾಗನ ತಾತ್ಪರ್ಯ
ಏನೆಂದರೆ ಇದ್ದವರು(Haves) ಇಲ್ಲದವರಿಗೆ(Have-nots) ತಮ್ಮ ಕೈಲಾದಷ್ಟು ಯಾವಾಗಲೂ ಸಹಾಯ
ಮಾಡ್ತಾ ಇರಬೇಕು. ದೇವರು ಕೆಲವರನ್ನು ಈ ಉದ್ದೇಶಕ್ಕಾಗಿಯೇ ಸ್ಥಿತಿವಂತರನ್ನಾಗಿ ಅಥವಾ
ಸ್ಥಿತಿವಂತರ ಮನೆಯಲ್ಲಿ ಹುಟ್ಟಿಸಿರುತ್ತಾನೆ. ಹಾಗಾಗಿ
ನಾವು ಇಲ್ಲದಕ್ಕಾಗಿ ಮರುಗದೆ ಇದ್ದದ್ದರಲ್ಲೇ ಜೀವನವನ್ನು ಅನುಭವಿಸುತ್ತಾ ಕೈಲಾದಷ್ಟನ್ನೂ
ಇಲ್ಲದವರಿಗಾಗಿ ಸಹಾಯ ಮಾಡುತ್ತಾ ಜೀವನ ಸಾಗಿಸಬೇಕು.
ನಮ್ಮ ಜೀವನವನ್ನು ಮತ್ತು ನಮ್ಮನ್ನು ನಾವು ಯಾವತ್ತೂ ತುಂಬಾ ಗಂಭೀರವಾಗಿ (ಸೀರಿಯಸ್ ಆಗಿ) ಪರಿಗಣಿಸಬಾರದು. ಯಾವುದೇ ವಿಷಯದಲ್ಲಿ ನಮ್ಮ ಪ್ರಯತ್ನ ಪರಿಪೂರ್ಣ ಮತ್ತು ನಿರಂತರವಾಗಿರಬೇಕು,ಆಗ ಅದರ ಪ್ರತಿಫಲ ನಿರೀಕ್ಷೆಗೆ ತಕ್ಕಂತೆಯೇ ಇರುತ್ತದೆ. ಮೊನ್ನೆ ನಮ್ಮ ಪ್ರಧಾನಿ ಮೋದಿಯವರು ಮಕ್ಕಳೊ೦ದಿಗಿನ ಸ೦ವಾದದಲ್ಲಿ ಹೇಳಿದ ಒಂದು ಮಾತು- “ಮಕ್ಕಳು ಏನಾಗಬೇಕೆಂದು ಕನಸು ಕಾಣುವದು ತಪ್ಪಲ್ಲ ಆದರೆ ಏನಾಗುತ್ತಾರೆ ಅಥವಾ ಏನಾಗಿರುತ್ತಾರೆ ಅದನ್ನು ಅನುಭವಿಸಿ ಆನ೦ದಿಸೋದು ಬಹಳ ಮುಖ್ಯ”. ಈ ಮಾತು ಇಡೀ ದೇಶದ ಜನತೆಯ ಮನ ಸೋಕಿತು. ನಾವು ಮಕ್ಕಳಲ್ಲಿ ಚಿಕ್ಕಂದಿನಿ೦ದಲೂ ಇಂಜಿನೀಯರ್ ಅಥವಾ ಡಾಕ್ಟರ್ ಆಗಬೇಕು ಅನ್ನೋ ಭಾವನೆಯನ್ನು ತುಂಬುತ್ತ ಬೆಳೆಸುತ್ತೇವೆ. ಇದಕ್ಕೆ ಯಾವ ಪಾಲಕರು ಹೊರತಲ್ಲ ಮತ್ತು ಒಂದು ಹಂತದವರಗೆ ಇಂತಹ ಅಪೇಕ್ಷೆ ಸಮ೦ಜಸವು ಹೌದು.ಸಾಮಾನ್ಯವಾಗಿ ನಾವು ಯಾವುದನ್ನೂ ನಮ್ಮ ಜೀವನದಲ್ಲಿ ಕಾರಣಾ೦ತರದಿಂದ ಸಾಧಿಸಲು ಸಫಲರಾಗಿರುವದಿಲ್ಲವೋ ಅಂತಹುದನ್ನು ನಮ್ಮ ಮಕ್ಕಳ ಮುಖಾಂತರ ಸಾಕಾರಗೊಳಿಸಲು ಪ್ರಯತ್ನಿಸುತ್ತೇವೆ.ಆದರೆ ಇ೦ತಹ ಭಾವನೆಗಳನ್ನೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಹೇರುವ ಬದಲು ಅವರಿಚ್ಛಿಸಿದ ಕ್ಷೇತ್ರದಲ್ಲಿ ಅವರಿಗೆ ಭಾರವೆನಿಸದ೦ತೆ ಮೂಲಭೂತವೆನಿಸುವ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಕಲಿಸುವದು ನಮ್ಮ ಗುರಿಯಾಗಬೇಕು.
ಪ್ರತಿಯೊಬ್ಬರ ಜೀವನದಲ್ಲಿ ಏಳು-ಬೀಳುಗಳು ಸಾಮಾನ್ಯ.ಎದ್ದಾಗ ತುಂಬಾ ಹಿಗ್ಗದೇ, ಬಿದ್ದಾಗ ಎದೆಗುಂದದೇ ಜೀವನದ ರಥವನ್ನು ಎಳೆಯುತ್ತಾ – ತಳ್ಳುತ್ತಾ ಮುಂದೆ ಸಾಗಬೇಕು. ಈ ಜೀವನದ ಕುರಿತಾದ ಕಿಶೋರಕುಮಾರ-ಲತಾ ಮಂಗೇಶಕರ್ ಹಾಡಿದ ಇನ್ನೊ೦ದು ಹಿಂದಿ ಹಾಡು ನನ್ನ ನೆನಪಿಗೆ ಬರುತ್ತೆ “ ಜಿಂದಗಿ ಪ್ಯಾರ ಕಾ ಗೀತ್ ಹೈ, ಇಸೆ ಹರ ದಿಲ್ ಕೋ ಗಾನಾ ಪಡೆಗಾ-ಜಿಂದಗಿ ಗಮ್ ಕಾ ಸಾಗರ್ ಭೀ ಹೈ, ಹಸ್ಕೆ ಉಸ ಪಾರ್ ಜಾನಾ ಪಡೆಗಾ”. ಇದೆಲ್ಲ ಬರೀತಾನಲ್ಲಪಾ ಇಂವ ಏನ ಭಾಳ ಫಿಲೋಸಫಿ ಹೇಳ್ತಾನ ಅನಕೊಬ್ಯಾಡ್ರಿ. ನನಗ ಸ್ವಲ್ಪ ಹಳೆಯ ನೆನಪುಗಳನ್ನು ಮೆಲಕು ಹಾಕು ಚಾಳಿ. ನಾ ಹೇಳ ಬಯುಸುವದಿಷ್ಟೆ, ಜೀವನ ಅನ್ನುವದನ್ನು ಈಸೀಯಾಗಿ ತಗೊಂಡು ಮಾಡಬೇಕಾದ ಸಾಧನೆಯನ್ನು ಮಾಡಿ ಹಾಯಾಗಿ ಕಳೆಯಬೇಕು,ಬಹಳಷ್ಟು ಬೇಡದಿರುವ ಟೆನ್ಷನ್ ತೆಗೆದುಕೊಂಡು ಅನವಶ್ಯಕವಾಗಿ ಬಿ.ಪಿ. ಶುಗರನ್ನು ಅವಧಿಗೆ ಮುನ್ನ (ಮಧ್ಯ ವಯಸ್ಸಿನಲ್ಲೇ) ಅವ್ಹಾನಿಸಿಕೊಳ್ಳುವದನ್ನು ತಡೆಗಟ್ಟಬಹುದು. ಜೀವನದಲ್ಲಿ ಎಲ್ಲವೂ ನಾವು ಅಂದು ಕೊಂಡಂತೆ ನಡೆಯುವದಿಲ್ಲ, ಆದರೆ ಜೀವನದ ಒಂದು ಘಟ್ಟದಲ್ಲಿ ಅಥವಾ ಒಂದು ಘಳಿಗೆಯಲ್ಲಿ ಬಹುಶಃ ಆಗಿದ್ದೆಲ್ಲಾ ನಮ್ಮ ಒಳ್ಳೆಯದಕ್ಕೆನೋ ಅಂತ ನಮಗೆ ಅನಿಸದೆ ಇರದು.ಜೀವನದಲ್ಲಿ ಸಮತೋಲನವನ್ನು ಕಳೆದುಕೊಳ್ಳದೆ, ಜೀವನೋತ್ಸಾಹವನ್ನು ಕುಂದಿಸದೆ,ಕಳೆದುಕೊಂಡದ್ದರ ಬಗ್ಗೆ ಬಹಳ ಮರುಗದೆ,ಬಂದ ಸುಖ-ದುಖಃಗಳನ್ನು ಅನುಭವಿಸುತ್ತಾ “ನೆವರ್ ಸೇ ಡೈ ಯ್ಯಾಟಿಟ್ಯೂಡ್ (ಮರಳಿ ಯತ್ನವ ಮಾಡು) ” ರೂಢಿಸಿಕೊಂಡು ಬದುಕುವದೇ ಸಾರ್ಥಕ ಜೀವನದ ಲಕ್ಷಣ.
ನಮ್ಮ ಜೀವನವನ್ನು ಮತ್ತು ನಮ್ಮನ್ನು ನಾವು ಯಾವತ್ತೂ ತುಂಬಾ ಗಂಭೀರವಾಗಿ (ಸೀರಿಯಸ್ ಆಗಿ) ಪರಿಗಣಿಸಬಾರದು. ಯಾವುದೇ ವಿಷಯದಲ್ಲಿ ನಮ್ಮ ಪ್ರಯತ್ನ ಪರಿಪೂರ್ಣ ಮತ್ತು ನಿರಂತರವಾಗಿರಬೇಕು,ಆಗ ಅದರ ಪ್ರತಿಫಲ ನಿರೀಕ್ಷೆಗೆ ತಕ್ಕಂತೆಯೇ ಇರುತ್ತದೆ. ಮೊನ್ನೆ ನಮ್ಮ ಪ್ರಧಾನಿ ಮೋದಿಯವರು ಮಕ್ಕಳೊ೦ದಿಗಿನ ಸ೦ವಾದದಲ್ಲಿ ಹೇಳಿದ ಒಂದು ಮಾತು- “ಮಕ್ಕಳು ಏನಾಗಬೇಕೆಂದು ಕನಸು ಕಾಣುವದು ತಪ್ಪಲ್ಲ ಆದರೆ ಏನಾಗುತ್ತಾರೆ ಅಥವಾ ಏನಾಗಿರುತ್ತಾರೆ ಅದನ್ನು ಅನುಭವಿಸಿ ಆನ೦ದಿಸೋದು ಬಹಳ ಮುಖ್ಯ”. ಈ ಮಾತು ಇಡೀ ದೇಶದ ಜನತೆಯ ಮನ ಸೋಕಿತು. ನಾವು ಮಕ್ಕಳಲ್ಲಿ ಚಿಕ್ಕಂದಿನಿ೦ದಲೂ ಇಂಜಿನೀಯರ್ ಅಥವಾ ಡಾಕ್ಟರ್ ಆಗಬೇಕು ಅನ್ನೋ ಭಾವನೆಯನ್ನು ತುಂಬುತ್ತ ಬೆಳೆಸುತ್ತೇವೆ. ಇದಕ್ಕೆ ಯಾವ ಪಾಲಕರು ಹೊರತಲ್ಲ ಮತ್ತು ಒಂದು ಹಂತದವರಗೆ ಇಂತಹ ಅಪೇಕ್ಷೆ ಸಮ೦ಜಸವು ಹೌದು.ಸಾಮಾನ್ಯವಾಗಿ ನಾವು ಯಾವುದನ್ನೂ ನಮ್ಮ ಜೀವನದಲ್ಲಿ ಕಾರಣಾ೦ತರದಿಂದ ಸಾಧಿಸಲು ಸಫಲರಾಗಿರುವದಿಲ್ಲವೋ ಅಂತಹುದನ್ನು ನಮ್ಮ ಮಕ್ಕಳ ಮುಖಾಂತರ ಸಾಕಾರಗೊಳಿಸಲು ಪ್ರಯತ್ನಿಸುತ್ತೇವೆ.ಆದರೆ ಇ೦ತಹ ಭಾವನೆಗಳನ್ನೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಹೇರುವ ಬದಲು ಅವರಿಚ್ಛಿಸಿದ ಕ್ಷೇತ್ರದಲ್ಲಿ ಅವರಿಗೆ ಭಾರವೆನಿಸದ೦ತೆ ಮೂಲಭೂತವೆನಿಸುವ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಕಲಿಸುವದು ನಮ್ಮ ಗುರಿಯಾಗಬೇಕು.
ಪ್ರತಿಯೊಬ್ಬರ ಜೀವನದಲ್ಲಿ ಏಳು-ಬೀಳುಗಳು ಸಾಮಾನ್ಯ.ಎದ್ದಾಗ ತುಂಬಾ ಹಿಗ್ಗದೇ, ಬಿದ್ದಾಗ ಎದೆಗುಂದದೇ ಜೀವನದ ರಥವನ್ನು ಎಳೆಯುತ್ತಾ – ತಳ್ಳುತ್ತಾ ಮುಂದೆ ಸಾಗಬೇಕು. ಈ ಜೀವನದ ಕುರಿತಾದ ಕಿಶೋರಕುಮಾರ-ಲತಾ ಮಂಗೇಶಕರ್ ಹಾಡಿದ ಇನ್ನೊ೦ದು ಹಿಂದಿ ಹಾಡು ನನ್ನ ನೆನಪಿಗೆ ಬರುತ್ತೆ “ ಜಿಂದಗಿ ಪ್ಯಾರ ಕಾ ಗೀತ್ ಹೈ, ಇಸೆ ಹರ ದಿಲ್ ಕೋ ಗಾನಾ ಪಡೆಗಾ-ಜಿಂದಗಿ ಗಮ್ ಕಾ ಸಾಗರ್ ಭೀ ಹೈ, ಹಸ್ಕೆ ಉಸ ಪಾರ್ ಜಾನಾ ಪಡೆಗಾ”. ಇದೆಲ್ಲ ಬರೀತಾನಲ್ಲಪಾ ಇಂವ ಏನ ಭಾಳ ಫಿಲೋಸಫಿ ಹೇಳ್ತಾನ ಅನಕೊಬ್ಯಾಡ್ರಿ. ನನಗ ಸ್ವಲ್ಪ ಹಳೆಯ ನೆನಪುಗಳನ್ನು ಮೆಲಕು ಹಾಕು ಚಾಳಿ. ನಾ ಹೇಳ ಬಯುಸುವದಿಷ್ಟೆ, ಜೀವನ ಅನ್ನುವದನ್ನು ಈಸೀಯಾಗಿ ತಗೊಂಡು ಮಾಡಬೇಕಾದ ಸಾಧನೆಯನ್ನು ಮಾಡಿ ಹಾಯಾಗಿ ಕಳೆಯಬೇಕು,ಬಹಳಷ್ಟು ಬೇಡದಿರುವ ಟೆನ್ಷನ್ ತೆಗೆದುಕೊಂಡು ಅನವಶ್ಯಕವಾಗಿ ಬಿ.ಪಿ. ಶುಗರನ್ನು ಅವಧಿಗೆ ಮುನ್ನ (ಮಧ್ಯ ವಯಸ್ಸಿನಲ್ಲೇ) ಅವ್ಹಾನಿಸಿಕೊಳ್ಳುವದನ್ನು ತಡೆಗಟ್ಟಬಹುದು. ಜೀವನದಲ್ಲಿ ಎಲ್ಲವೂ ನಾವು ಅಂದು ಕೊಂಡಂತೆ ನಡೆಯುವದಿಲ್ಲ, ಆದರೆ ಜೀವನದ ಒಂದು ಘಟ್ಟದಲ್ಲಿ ಅಥವಾ ಒಂದು ಘಳಿಗೆಯಲ್ಲಿ ಬಹುಶಃ ಆಗಿದ್ದೆಲ್ಲಾ ನಮ್ಮ ಒಳ್ಳೆಯದಕ್ಕೆನೋ ಅಂತ ನಮಗೆ ಅನಿಸದೆ ಇರದು.ಜೀವನದಲ್ಲಿ ಸಮತೋಲನವನ್ನು ಕಳೆದುಕೊಳ್ಳದೆ, ಜೀವನೋತ್ಸಾಹವನ್ನು ಕುಂದಿಸದೆ,ಕಳೆದುಕೊಂಡದ್ದರ ಬಗ್ಗೆ ಬಹಳ ಮರುಗದೆ,ಬಂದ ಸುಖ-ದುಖಃಗಳನ್ನು ಅನುಭವಿಸುತ್ತಾ “ನೆವರ್ ಸೇ ಡೈ ಯ್ಯಾಟಿಟ್ಯೂಡ್ (ಮರಳಿ ಯತ್ನವ ಮಾಡು) ” ರೂಢಿಸಿಕೊಂಡು ಬದುಕುವದೇ ಸಾರ್ಥಕ ಜೀವನದ ಲಕ್ಷಣ.
No comments:
Post a Comment
Note: only a member of this blog may post a comment.