ನನಗೆ ಈ ಶಿಕ್ಷಣ ಕ್ಷೇತ್ರದ ಬಗ್ಗೆ ಒಲವು
ಮತ್ತು ಆಸಕ್ತಿ ಕೊಂಚ ಜಾಸ್ತಿನೇ. ಆದ್ದರಿಂದ ಮತ್ತೆ ನಾನು ಬರೆಯುತ್ತಿರುವ ವಿಷಯ
ಶಿಕ್ಷಣದ ಕುರಿತಾದುದೇ ಆಗಿದೆ. ವಿಶೇಷವಾಗಿ
ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಹೊರೆ
ಆಗಬಾರದು, ಇದನ್ನು ಆದಷ್ಟು ನೀತಿ ಕಥೆಗಳ ಮುಖಾಂತರ ಕಲಿಸಿದರೆ ತುಂಬಾ ಒಳ್ಳೆಯದು. ಆದರೆ ಈಗ ಒಂದನೇ ತರಗತಿಯಿಂದಲೇ
ಪರಿಸರ ಜ್ಞಾನ (EVS) ಮತ್ತು ಇನ್ನೂ ಮಕ್ಕಳಿಗೆ ತುಂಬಾ ಭಾರ ಎನಿಸುವ ವಿಷಯಗಳನ್ನು ಕಲಿಸಲಾಗುತ್ತಿದೆ. ನಮ್ಮ
ಮಕ್ಕಳಿಗೆ ಪಂಚತಂತ್ರದ ಕಥೆಗಳು ,ರಾಮಾಯಣ –ಮಹಾಭಾರತದ ಕಥೆಗಳು,ಜಾನಪದ ಕಥೆಗಳು ಹಾಗೂ ಅಜ್ಜಿಯ ಕಥೆಗಳನ್ನು ಪಠ್ಯದ ಮುಖಾಂತರ ಕಲಿಸಿದರೆ ಅವರಿಗೆ ಅದರಲ್ಲಿರುವ
ನೀತಿಪಾಠಗಳ ಬಗ್ಗೆ ಅರಿವು ಮೂಡುತ್ತದೆ.
ಈಗ ಯಾವದೇ ಕ್ಲಾಸಿನ ಪುಸ್ತಕ ಹುಡುಕಿದರು “ರವಿಯು ಅಜ್ಜನ ಮನೆಗೆ ಹೋದನು”,”ಸೋಮನ
ಗೌಡರ ನಾಯಿ”, ”ಗಮಯನ ಕಥೆ”, ”ಕೆರೆಗೆ ಹಾರ”,”ಸೋನೆ ಕಿ ಅಂಡಾ
ದೇನೆವಾಲಿ ಮುರಗಿ”,”ರೋಮಿಯೋ ಜುಲಿಯಟ್”,”ವಂಡರ್
ಹೆಡ್” ಮತ್ತು ಈ ತರಹದ ಅನೇಕ ಕಥೆಗಳ ಕುರುಹೆ ಸಿಗುವದಿಲ್ಲ.
ಪಠ್ಯಕ್ರಮ ಪರಿಷ್ಕರಿಸುವರು ಯಾವ ಮಾನದಂಡವನ್ನು ಅನುಸರಿಸುತ್ತಾರೋ ಗೊತ್ತಿಲ್ಲ,ಇದಕ್ಕೆ ಈ ಎಡಪ೦ಥೀಯರ ತುಷ್ಟೀಕರಣದ
ರಾಜಕೀಯ ಕಾರಣ ಇದ್ದರೂ ಇರಬಹುದು.
ಇನ್ನು ಈ ಸೆಮಿಸ್ಟರ್ ಪದ್ಧತಿಯನ್ನು ನೋಡಿ,ಇದು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಬೇಕಾ? ಖಂಡಿತವಾಗಿಯೂ ಬೇಡ.ಇದು ನಮ್ಮ ಮಕ್ಕಳನ್ನು ಕೇವಲ A+
ತೆಗಿದುಕೊಳ್ಳೋ ಯಂತ್ರಗಳನ್ನಾಗಿ ಮಾಡ್ತಾ ಇದೆ.
ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಹಿಂದೆ
ಕಲಿತದ್ದನ್ನು ನೆನಪಿಟ್ಟುಕೊಂಡು ಮುಂದುವರಿಸಿಕೊಂಡು ಹೋಗುವದು ಅತ್ಯ೦ತ ಅವಶ್ಯಕ.ಆದರೆ ಈ
ಸೆಮಿಸ್ಟರ್ ಪದ್ಧತಿಯಲ್ಲಿ ಮಕ್ಕಳು ಹಿಂದೆ ಕಲಿತದನ್ನು ಮರೆತು ಕೇವಲ ಮುಂದಿನ ಸೆಮಿಸ್ಟರನ
ಪರೀಕ್ಷೆಗೋಸ್ಕರ ಓದುತ್ತಾರೆ. ಇದರಿಂದ ನಿಜವಾಗಿ ಮಕ್ಕಳ ಮುಂದಿನ ಶಿಕ್ಷಣದ ಭವಿಷ್ಯಕ್ಕೆ ಬೇಕಾಗುವ
ಮೂಲ ತತ್ವಗಳನ್ನು ಕಲಿಯುವದರಲ್ಲಿ ಹಿಂದುಳಿದು
ಬಿಡುತ್ತಾರೆ.
ಇನ್ನೊ೦ದು ವಿಷಯವನ್ನು ಗಮನಿಸೋಣ CBSE ಶಾಲೆಗಳಲ್ಲಿ CCE (CONTINUOUS AND COMPREHENSIVE EVALUATION) ಪದ್ಧತಿ ಜಾರಿಯಲ್ಲಿದೆ. ಇದರಲ್ಲಿ ಯಾವುದೇ
ವಿದ್ಯಾರ್ಥಿಯನ್ನು 9 ನೇ ತರಗತಿಯವರಗೆ ಫೇಲ್ ಆದರೂ ಪಾಸ್ ಮಾಡಲಾಗುತ್ತದೆ ಅಂದರೆ ಎತ್ತಿ
ಹಾಕಲಾಗುತ್ತದೆ. ಕೇವಲ 10ನೇ ತರಗತಿಯಲ್ಲಿ ಮಾತ್ರ
ಫೇಲ್ ಆದರೆ ಅದೇ ತರಗತಿಯಲ್ಲಿ ಮತ್ತೆ
ಕಲಿಯಬೇಕಾಗುತ್ತದೆ. ಹಾಗದಲ್ಲಿ ಒಂದು ಮಗುವಿನ ಪ್ರತಿಭೆ ಹಾಗೂ ಸಾಮರ್ಥ್ಯ ಮಗುವಿಗಾಗಲಿ ಅದರ ಹೆತ್ತವರಿಗಾಗಲೀ
ಅರಿವಾಗೋವಷ್ಟರಲ್ಲಿ ಸಮಯ ಮೀರಿ ಹೋಗಿರುತ್ತದೆ. ಈ ಪದ್ಧತಿ ಜಾರಿಯಲ್ಲಿ
ಬಂದದ್ದು U.P.A.-1 ರ ಅವಧಿಯಲ್ಲಿ,ಇದಕ್ಕೆ
ಕೊಟ್ಟ ಕಾರಣವೇನೆ೦ದರೆ ಯಾವ ಮಕ್ಕಳಲ್ಲೂ ಶಿಕ್ಷಣದ
ಬಗ್ಗೆ ಹೆದರಿಕೆ ಹುಟ್ಟಬಾರದು ಮತ್ತು ಎಲ್ಲ ಮಕ್ಕಳು 10ನೇ ತರಗತಿಯವರಗೆ ಹಾಯಾಗಿ ಯಾವುದೇ
ಒತ್ತಡವಿಲ್ಲದೆ ಕಲಿಯಲಿಬೇಕು. ಆದರೆ ಇದರಿಂದ ಆಗಿರೋದೇನು? ಯಾವದೇ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯ ಸರಿಯಾದ ಸಮಯದಲ್ಲಿ ಶಿಕ್ಷಕರಿಗಾಗಲಿ ಅಥವಾ
ಮಗುವಿನ ಪೋಷಕರಿಗಾಗಲಿ ಅರಿವಾಗುತ್ತಿಲ. ದೇವರು ಎಲ್ಲರಲ್ಲೂ ಒಂದಿಲ್ಲಾ ಒಂದು ರೀತಿಯ
ಪ್ರತಿಭೆಯನ್ನು ಕರುಣಿಸಿರುತ್ತಾನೆ,ಅದನ್ನು ಸರಿಯಾದ ಸಮಯದಲ್ಲಿ
ಗುರುತಿಸಿ ಪೋಷಿಸೋದು ನಮ್ಮೆಲ್ಲರ ಕರ್ತವ್ಯ. ಒಂದು
ಮಗು ಗಣಿತದಲ್ಲಿ ಅಥವಾ ವಿಜ್ಞಾನದಲ್ಲಿ
ಹಿಂದಿರಬಹುದು ಆದರೆ ಆಟದಲ್ಲಿ ಅಥವಾ ಸಂಗೀತದಲ್ಲಿ ಅಥವಾ ಸಾಮಾನ್ಯ ಜ್ಞಾನದಲ್ಲಿ ತುಂಬಾ ಚೆನ್ನಾಗಿರಬಹುದು. ಇನ್ನೂ ಕೆಲ ಮಕ್ಕಳು ಓದಿನ
ವಿಷಯದಲ್ಲಿ ತುಂಬಾ ಹಿಂದಿರಬಹುದು ಆದರೆ ಆ ಮಕ್ಕಳ ಆಸಕ್ತಿಯನ್ನೂ ಅರಿತು ಆಯಾ ಕ್ಷೇತ್ರದಲ್ಲಿ ಆ
ಮಕ್ಕಳನ್ನು ತೊಡಗಿಸಿ ಬೆಳಸಬೇಕು.
ಆದ್ದರಿಂದ ಈ C. C. E. ಪದ್ಧತಿ ಆದಷ್ಟು ಬೇಗ ತೊಲಗಬೇಕು. ಈ ಕುರಿತಾಗಿ
ನಾನು ಈಗಾಗಲೇ ಶಿಕ್ಷಣ ಮಂತ್ರಿ (ಎಚ್.ಆರ್.ಡಿ. ಮಿನಿಸ್ಟರ್) ಹಾಗೂ ಪ್ರಧಾನ ಮಂತ್ರಿಗಳ
ವೆಬ್-ಸೈಟ್ ನಲ್ಲಿ ಹಾಗೂ ಫೆಸಬುಕ್ ಪೇಜ್ ನಲ್ಲಿ ಮಾಹಿತಿಯನ್ನು ಹಾಕಿ ಅವರ ಗಮನ ಸೆಳೆಯುವ
ಪ್ರಯತ್ನವನ್ನು ಮಾಡಿದ್ದೇನೆ.ನೀವೂ ಕೂಡ ಇದನ್ನು ಅನುಸರಿಸಬಹುದು.
ಇನ್ನೂ ಉನ್ನತ ಶಿಕ್ಷಣದ ಬಗ್ಗೆ ಸ್ವಲ್ಪ
ಗಮನಿಸೋಣ.ಈಗ ನಮ್ಮ ರಾಜ್ಯದಲ್ಲಿ ಇಂಜಿನೀಯರಿಂಗ್ ಕಾಲೇಜಗಳ ಸಂಖೆ ನಾಯಿ ಕೊಡೆಗಳಂತೆ ಬೆಳದಿದೆ,
ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ
ಸೌಲಭ್ಯಗಳು ಇಲ್ಲದೆ ಇದ್ದರೂ ಕೇವಲ ಹಣ ಮಾಡುವ
ಯಂತ್ರಗಳಾಗಿ ತಲೆ ಎತ್ತಿ ನಿಂತಿವೆ.ಇದಕ್ಕೆ ಕಾರಣ
ಹುಡುಕುತ್ತಾ ಹೋದರೆ ನಮಗೆ ಮೊದಲು ಗೋಚರಿಸೋದು 12th (PUC-II) ನಲ್ಲಿ PCM 45% ಮಾಡಿ CETಯಲ್ಲಿ 50000 ರೈ೦ಕಿಂಗ್ ಬಂದರೂ ಇಂಜಿನೀಯರಿಂಗ್
ಸೀಟು ಗ್ಯಾರಂಟಿ ಅನ್ನೋದು. ಈ ಪರಿಸ್ಥಿತಿ 1992ರ ನಂತರ ಕ್ರಮೇಣವಾಗಿ ಇಂಜಿನೀಯರಿಂಗ್ ಕಾಲೇಜುಗಳ ಸಂಖ್ಯೆ ಬೆಳೆಯುತ್ತಾ ಹೋದಂತೆ ನಿರ್ಮಾಣವಾಯಿತು. ಇಂತಹ ಪರಿಸ್ಥಿತಿಯಲ್ಲಿ PUCಯಲ್ಲಿ
ಚೆನ್ನಾಗಿ ಪರ್ಸೆಂಟೇಜ್ ಮಾಡಿ ಸ್ವ ಇಚ್ಚೆಯಿಂದ BSc ತದನಂತರ MSc ಮಾಡ ಬಯಸುವ ವಿದ್ಯಾರ್ಥಿಗಳು ತುಂಬಾ
ವಿರಳ. ಹಾಗದಲ್ಲಿ ಯಾರಿಗೆ ಇಂಜಿನೀಯರಿಂಗ್ ಸೀಟು ಸಿಗುವದಿಲ್ಲವೋ ಅಂಥವರು ಮಾತ್ರ BSc ಆಯ್ದುಕೊಳ್ಳುತ್ತಾರೆ ಆಮೇಲೆ ಕೆಲವರು MSc ಮಾಡಿ
ಉಪನ್ಯಾಸಕರಗುತ್ತಾರೆ. ಹಾಗದಲ್ಲಿ ನಮ್ಮ ಕಾಲೇಜಗಳಲ್ಲಿಯ ಉಪನ್ಯಾಸಕರ ಗುಣಮಟ್ಟ ಹೇಗಿರಬೇಡ? ನೀವೇ ಊಹಿಸಬಹುದು! ಮತ್ತು ಇಂಥ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಕಲಿತ ಇಂಜಿನೀಯರಗಳ ಗುಣಮಟ್ಟ ಹೇಗಿರಬಹುದು?
ನಮ್ಮ ಕಾಲೇಜ್ ಗಳಲ್ಲಿಯ ಪ್ರಾಧ್ಯಾಪಕರ ಹಾಗು
ವಿದ್ಯಾರ್ಥಿಗಳ ಗುಣಮಟ್ಟ
ಉನ್ನತಮಟ್ಟದಾಗಿರಬೇಕಾದರೆ,
- ಇಂಜಿನೀಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು PUC (12th) ಯಲ್ಲಿ PCM ಕನಿಷ್ಟ 70% ಅಂಕಗಳನ್ನು ಪಡೆಯುವದು ಕಡ್ಡಾಯವಾಗಬೇಕು.
- ಮೂಲಭೂತ ಸೌಕರ್ಯಗಳಿಲ್ಲದ ಇಂಜಿನೀಯರಿಂಗ್ ಕಾಲೇಜ್ ಹಾಗೂ PU ಕಾಲೇಜುಗಳನ್ನು ಮುಚ್ಚಬೇಕು.
- ಯಾವುದೇ ಹೊಸ ಇಂಜಿನೀಯರಿಂಗ್ ಕಾಲೇಜ್ ತೆರೆಯಲು ಕನಿಷ್ಟಪಕ್ಷ 10 ವರ್ಷ ಪರವಾನಿಗೆ ಕೊಡಬಾರದು.
- PUCಯಲ್ಲಿ (PCM) ಶೇಕಡಾ 80ಕಿಂತ ಹೆಚ್ಚು ಅಂಕ ಪಡೆದು BSc ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು.
- ಕಾಲೇಜ್ ಪ್ರಾಧ್ಯಾಪಕರ ಭಾಷಾ ಜ್ಞಾನ (ಇಂಗ್ಲೀಷ್) ವ್ಯಾಕರಣ ಬದ್ಧವಾಗಿರಬೇಕು ಹಾಗೂ ಪರಿಣಿತರ ಸಮಿತಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ ನಡೆಯುವಂತಾಗಬೇಕು.ಕಾಲೇಜುಗಳಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಪಾರಂಪರಿಕ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳುವಂತಾಗಬೇಕು.
- ತಜ್ಞರ ಒಂದು ಸಮಿತಿ ರಚಿಸಿ (ಸರಕಾರಿ ಮತ್ತು ಖಾಸಗಿ) ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.
ಇವೆಲ್ಲ ನನ್ನ ಅನಿಸಿಕೆ ಮತ್ತು ಆಶಯಗಳು,ಎಷ್ಟರ
ಮಟ್ಟಿಗೆ ನಮ್ಮ ಸರಕಾರ ಅವುಗಳನ್ನು ಸಕಾರಗೊಳಿಸತ್ತೋ ಗೊತ್ತಿಲ್ಲ. ಆದರೂ ನನಗನಿಸಿದ್ದನ್ನು
ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದೇನೆ ಅಷ್ಟೆ.
No comments:
Post a Comment
Note: only a member of this blog may post a comment.