ಜಾನ್
ರಾಸ್ಕಿನ್’ರ ಮಾತುಗಳನ್ನು ಅಕ್ಷರಶಃ
ಪುಷ್ಟೀಕರಿಸುವ ಕಲಾಕೃತಿಗಳ,ದೇಗುಲಗಳ ಹಾಗೂ ಭವ್ಯ ಸಂಸ್ಕೃತಿಯ ಬೀಡೇ ನಮ್ಮ ಭಾರತ. ನಮ್ಮ ದೇಶದ
ಸಾ೦ಸ್ಕೃತಿಕ ಧರೋವರಗಳಾಗಿ ಪಡೆಯಬೇಕಾದ ಪ್ರಾಮುಖ್ಯತೆಯನ್ನು ಪಡೆಯದೇ ಹೆಚ್ಚು ಬೆಳಕಿಗೆ ಬಾರದೇ ಇರುವ ಅನೇಕ ಪುರಾತನ ದೇವಾಲಯಗಳ ಪೈಕಿ ಖಿದ್ರಾಪುರದ ‘ಕೊಪೇಶ್ವರ
ದೇವಾಲಯ’ವೂ ಒಂದು. ಚಿಕ್ಕೋಡಿಯಿಂದ ೩೫ಕಿ.ಮೀ ಹಾಗೂ ಕೊಲ್ಹಾಪುರದಿಂದ ೭೫ಕಿ.ಮೀ ದೂರದಲ್ಲಿರುವ ಕರ್ನಾಟಕ
ಮಹಾರಾಷ್ಟ್ರ ಗಡಿ ಭಾಗದ ಗ್ರಾಮ ಖಿದ್ರಾಪುರ. ಖಿದ್ರಾಪುರದ
ಕೃಷ್ಣಾ ತೀರದಲ್ಲಿ ಬಾದಾಮಿಯ ಚಾಲುಕ್ಯರಿಂದ ೭ನೇ ಶತಮಾನದಲ್ಲಿ ನಿರ್ಮಿತವಾದ ಭವ್ಯ ಕಲಾತ್ಮಕ
ಮತ್ತು ಅನನ್ಯ ಮಂದಿರ ಈ ‘ಕೊಪೇಶ್ವರ ದೇವಾಲಯ’.
ಈ
ದೇವಲಯಕ್ಕೊಂದು ಪೌರಾಣಿಕ ಹಿನ್ನಲೆ ಉಂಟು. ದಕ್ಷ ರಾಜನ ಮಗಳಾದ ಸತಿ ಭಗವಾನ್ ಶಿವನನ್ನು
ವರಿಸುತ್ತಾಳೆ. ಈ ಸತಿಯ ತಂದೆ ದಕ್ಷ ರಾಜನಿಗೆ ಶಿವನನ್ನು ಕಂಡರೆ ಆಗಿ ಬರುತ್ತಿರಲಿಲ್ಲ. ಒಮ್ಮೆ
ದಕ್ಷ ತನ್ನ ಆಸ್ಥಾನದಲ್ಲಿ ಯಜ್ಞವೊಂದನ್ನು ಏರ್ಪಡಿಸಿ ಉದ್ದೇಶಪೂರ್ವಕವಾಗಿಯೇ ಶಿವ ಮತ್ತು
ಸತಿಯರನ್ನು ಅವ್ಹಾನಿಸಲಿಲ್ಲ. ತವರಿನ ಮಮತೆಯಿಂದ ಕರೆಯದಿದ್ದರೂ ದಕ್ಷನ ಯಜ್ಞಕ್ಕೆ ಸತಿಯು ನಂದಿಯ
ಮೇಲೆ ಕುಳಿತು ತವರಿಗೆ ಆಗಮಿಸುತ್ತಾಳೆ. ಆದರೆ ದಕ್ಷ ಸತಿಯ ಮುಂದೆ ಪತಿಯಾದ ಶಿವನನ್ನು ನಿಂದಿಸಿ
ಹೀಯಾಳಿಸುತ್ತಾನೆ, ಅವಮಾನ ತಾಳಾರದೆ ಸತಿ ಯಜ್ಞ ಕುಂಡಕ್ಕೆ ಹಾರಿ ಆಹುತಿಯಾಗಿ ಬಿಡುತ್ತಾಳೆ.
ಕೋಪೋದ್ರಿಕ್ತನಾದ ಶಿವ ಅಲ್ಲಿಗೆ ಆಗಮಿಸಿ ದಕ್ಷನ ಶಿರಚ್ಚೆಧಿಸುತ್ತಾನೆ. ಅಲ್ಲಿರುವ ಇತರ ದೇವತೆಗಳು ಶಿವನ
ಸಿಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ ಸ್ಥಳಕ್ಕೆ ಕರೆತರಲಾಗಿ,
ಕೃಷ್ಣೆಯ ಒಡಲಲ್ಲಿ ತನ್ನ ಜಟವನ್ನು (ಕೂದಲು)
ಭೂಮಾತೆಯ ಮೇಲೆ ಅಪ್ಪಳಿಸಿ ಶಿವ ತನ್ನ ಕೋಪವನ್ನು ವ್ಯಕ್ತಪಡಿಸುತ್ತಾನೆ.
ಅದಕ್ಕಾಗಿಯೇ
ಕೊಪೇಶ್ವರ
ದೇವಾಲಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.ಇವುಗಳು ಹಜಾರದ (ಮುಖಮಂಟಪ) ಮೂಲಕ ಅಂತರ್ಸಂಪರ್ಕಿಸಲ್ಪಟ್ಟಿವೆ. ನಾವು
ಪ್ರವೇಶಿಸುವ ದೇವಾಲಯದ ಮೊದಲ ವಿನ್ಯಾಸವೇ ಸ್ವರ್ಗ ಮಂಟಪ, ಅದ್ಭುತ
ಕೆತ್ತನೆಯುಳ್ಳ ಕಂಬಗಳಿಂದ ಅಲಂಕೃತ, ವರ್ತುಳಾಕರದಲ್ಲಿ ನಿರ್ಮಿಸಲ್ಪಟ್ಟ ಆಕಾಶಕ್ಕೆ
ತೆರೆದುಕೊಂಡಿರುವ ಮೇಲ್ಛಾವಣಿಯುಳ್ಳ ದೇವಸ್ಥಾನದ ಮುಂಭಾಗದ ಪ್ರಾಂಗಣವೇ ಸ್ವರ್ಗಮಂಟಪ.
ವರ್ತುಲಾಕಾರದ ತೆರೆದ ಮೇಲ್ಛಾವಣಿ ಪೂರ್ಣಿಮೆಯ
ಚಂದ್ರನ ಬಿಂಬದಂತೆ ಗೋಚರಿಸುತ್ತದೆ.ಇಲ್ಲಿ ರಾಜ ತನ್ನ ಮಂತ್ರಿಗಳೊಡನೆ ಹಾಗೂ ಆಸ್ಥಾನ ಪಂಡಿತರೊಡನೆ
ಕುಳಿತು ಚರ್ಚಿಸುತ್ತಿದ್ದನಂತೆ. ಸ್ವರ್ಗ ಮಂಟಪದ
ವಾಸ್ತುಶಿಲ್ಪ ವಿಶಿಷ್ಟವಾಗಿದೆ. ಪ್ರತಿಯೊಂದು ಸ್ತಂಭವನ್ನು ಚದರ, ಷಟ್ಕೋನ ಮತ್ತು
ಆಕ್ಟಾಗನ್ ಹೀಗೆ ವಿವಿಧ ಆಕಾರಗಳಲ್ಲಿ
ಕೆತ್ತಲಾಗಿದೆ. ಶಂಕುವಿನಾಕಾರದ ಗರ್ಭಗುಡಿಯು ವಿಶಿಷ್ಟವಾಗಿದೆ, ಕೋಪೇಶ್ವರ
ದೇವಾಲಯದ ಗರ್ಭಗುಡಿಯಲ್ಲಿ ವಿಷ್ಣು (ಧೋಪೆಶ್ವರ) ಹಾಗೂ ಕೋಪೇಶ್ವರ (ಶಿವ) ಲಿಂಗಗಳಿವೆ.
ಗರ್ಭಗುಡಿಯ ದ್ವಾರದಲ್ಲಿ ಜಯವಿಜಯರ ಸುಂದರ
ವಿಗ್ರಹಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಮೈಯಲ್ಲಿ ಆನೆಗಳ ಮೇಲೆ ಆಭೂಷಣ ಹಾಗೂ
ಆಯುಧಗಳಿಂದ ವಿಜೃಂಭಿಸುವ ಅನೇಕ ದೇವತೆಗಳ
ವಿಗ್ರಹಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಸುಮಾರು ೯೨ ಆನೆಗಳ ವಿಗ್ರಹಗಳನ್ನು ದೇವಸ್ಥಾನದ
ಹೊರಮೈಯಲ್ಲಿ ಕೆತ್ತಲಾಗಿದೆ.
ಕೆಳಭಾಗದಲ್ಲಿ ಕೆತ್ತಲ್ಪಟ್ಟಿರುವ ಆನೆಗಳು ದೇವಸ್ಥಾನದ ಭಾರ
ಹೊತ್ತಿವೆಯೇನೋ ಎಂದು ಭಾಸವಾಗುತ್ತದೆ!! ಮಾನವನ ವಿವಿಧ ಭಾವಭಂಗಿಗಳನ್ನು ಶಿಲ್ಪಿಗಳು ತಮ್ಮ
No comments:
Post a Comment
Note: only a member of this blog may post a comment.